ജി.എച്ച്.എസ്. എസ്. മൊഗ്രാൽ പുത്തൂർ/അക്ഷരവൃക്ഷം/ಸೋಲರಿಯದ ಭಾರತ

Schoolwiki സംരംഭത്തിൽ നിന്ന്
ಸೋಲರಿಯದ ಭಾರತ

ಹೋಗಣ್ಣ ಹೋಗಣ್ಣ ಓ ಕೊರೊನಾ
 ಬದುಕಲು ಬಿಡುವೆಯ ಈ ಮನುಜ ಕುಲವನ್ನ
 ಓ ಮಹಾಮಾರಿ ಕೊರೊನಾ
 ನೀ ನಡುಗಿಸಿದೆ ನಿನ್ನ ತವರು ಚೀನವನ್ನ
 ಕೆಂಗಡಿಸಿದೆ ರಾಷ್ಟ್ರ ರಾಷ್ಟ್ರಗಳನ್ನು.
 ನಿನ್ನ ಅಟ್ಟಹಾಸಕ್ಕೆ ಕನಸೆಂದು ಭಾವಿಸು ಭಾರತವನ್ನ
 ನಮ್ಮದಿದು ಮುಕ್ಕೋಟಿ ದೇವತೆಗಳ ತವರಣ್ಣ
 ಹೋಗಣ್ಣ ಹೋಗಣ್ಣ ಓ ಕೊರೊನಾ
 ಬದುಕಲು ಬಿಡುವೆಯ ಈ ಮನುಜಕುಲವನ್ನ
 ನಡುಗಿದನು ನಿನ್ನೆದುರು
 ಜಗತ್ತಿನ ಹಿರಿಯಣ್ಣ
 ನಾನು ನನ್ನಿಂದ ಎಂಬುವವರಿಗೆ
 ತಿಳಿಸಿದೆ ತಕ್ಕ ಪಾಠವನ್ನ
 ಆದರೂ ಅಸಾಧ್ಯ
 ನಿನ್ನಿಂದ ನಡುಗಿಸಲು ಭಾರತವನ್ನ
 ಅದಕ್ಕೊಂದು ಕಾರಣ
 ಧೈರ್ಯ ಶೌರ್ಯ ಏಕತೆಯಿಂದ
 ಸಾಕಿದ ತಾಯಿಭಾರತೀಯ
 ಮಕ್ಕಳು ನಾವಣ್ಣ
 ಹೋಗಣ್ಣ ಹೋಗಣ್ಣ ಓ ಕೊರೊನಾ
 ಬದುಕಲು ಬಿಡುವೆಯ ಈ ಮನುಜ ಕುಲವನ್ನ

ಶ್ರಾವ್ಯ.ಯು .
X ജി.എച്ച്.എസ്. എസ്. മൊഗ്രാൽ പുത്തൂർ
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത